ಗುರುವಾರ, ಮೇ 29, 2014

ಬದುಕಿನ ಅರ್ಥವಂತಿಕೆಗೆ ಕಲಾಕೃತಿಗಳೆ ಸಾಕ್ಷಿ.-ಡಾ.ಖಾಡೆ


        ಬದುಕಿನ ಅರ್ಥವಂತಿಕೆಗೆ ಕಲಾಕೃತಿಗಳೆ ಸಾಕ್ಷಿ.-ಡಾ.ಖಾಡೆ


ಇಳಕಲ್ಲ. 22.05.2014-
ಬದುಕು ಸುಂದರ ಮತ್ತು ಅರ್ಥಪೂರ್ಣವಾಗಿ ರೂಪುಗೊಳ್ಳಲು ಕಲಾಕೃತಿಗಳು ನಮ್ಮ ನಡುವೆ ಮಾಧ್ಯಮವಾಗಿ ನಿಲ್ಲುತ್ತವೆ ಎಂದು  ಸಾಹಿತಿ ಡಾ.ಪ್ರಕಾಶ ಖಾಡೆ  ಹೇಳಿದರು.ನಗರದ ಗವಿಮಠ ಲಲಿತಕಲಾ ಮಹಾಸಂಸ್ಥಾನದ ಚಿತ್ರಕಲಾ ಸ್ನಾತಕೋತ್ತರ ಕೇಂದ್ರ ಹಮ್ಮಿಕೊಂಡಿದ್ದ ಲಕ್ಷ್ಮಣ ಬದಾಮಿ ಅವರ ‘ರೂಪ ನಿರೂಪ’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯದಲ್ಲಿ ಕಲಾವಿಮರ್ಶಕರ ಕೊರತೆಯನ್ನು ಲಕ್ಷ್ಮಣ ಬದಾಮಿ ಅವರು ತುಂಬುವ ಮೂಲಕ ‘ರೂಪ ನಿರೂಪ’ ಕೃತಿಯ ಮೌಲ್ಯ ಹೆಚ್ಚಿಸಿದ್ದಾರೆ ಎಂದೂ ಅವರು ಹೇಳಿದರು. ಜಿಲ್ಲೆಯಲ್ಲಿ ಅರಂಭಿಸಲು ಉದ್ದೇಶಿಸಿರುವ ಲಲಿತಕಲಾ ವಿಶ್ವವಿದ್ಯಾಲಯವನ್ನು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿಯೇ ಆರಂಭಿಸುವ ಮೂಲಕ ಬಾದಾಮಿ ಪರಿಸರದ ಮೂಲಕ ನಮ್ಮ ಭಾಗದ ಕಲೆ,ಸಂಸ್ಕøತಿಯನ್ನು ವಿಶ್ವಮಾನ್ಯಗೋಳಿಸಬೇಕಾಗಿದೆ ಎಂದೂ ಡಾ.ಖಾಡೆ ಹೇಳಿದರು

.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಶಿಕ್ಷಣ ಇಲಾಖೆ ಆಯುಕ್ತರ ಕಛೇರಿಯ ಚಿತ್ರಕಲಾ ಅಧಿಕಾರಿ ಮಹಾಂತೇಶ ಕಂಠಿ ಚಿತ್ರಕಲೆಯೂ ಸೇರಿದಂತೆ ಲಲಿತಕಲೆಯ ಎಲ್ಲ ಅಧ್ಯಯನಕ್ಕೆ ಈಗ ತುಂಬಾ ಅವಕಾಶಗಳಿದ್ದು ಹೊಸಬರು ಈ ಕಡೆಗೆ ಆಕರ್ಷಿತರಾಬೇಕೆಂದರು.ವಕೀಲರ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಲ್ಲಿಕಾರ್ಜುನ ಬೃಂಗಿಮಠ ಮಾತನಾಡಿ ಕಲಾತ್ಮಕ ಚಿತ್ರಬರಹಗಳು ಮಾಧ್ಯಮದ ಮೂಲಕ ಜನರ ಅಭಿಪ್ರಾಯಗಳನ್ನು ತುಂಬಾ ಸಮರ್ಥವಾಗಿ ರೂಪಿಸುತ್ತಿವೆ ಎಂದರು.ಬೆಳಗಾವಿ ವಿಭಾಗದ ಚಿತ್ರಕಲಾ ಅಧಿಕಾರಿ ಹೇಮಂತ ದೇಶಪಾಂಡೆ,ಬೆಂಗಳೂರು ಆಯುಕ್ತರ ಕಛೇರಿಯ ಜೆ.ಎಂ.ಜಂಗೀ.ಗುಲ್ಬರ್ಗಾ ವಿಭಾಗದ ಟಿ.ದೇವೇಂದ್ರಪ್ಪ ಕೃತಿಕಾರ ಲಕ್ಷ್ಮಣ ಬದಾಮಿ ಮೊದಲಾದವರು ವೇದಿಕೆ ಮೇಲಿದ್ದರು.ಪ್ರಾಚಾರ್ಯ ಡಾ.ಬಸವರಾಜ ಗವಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿ ಬರುವ ಅಕ್ಟೋಬರದಲ್ಲಿ ಇಲಕಲ್ಲದಲ್ಲಿ ಕಲಾ ಸಮಾವೇಶ ಮತ್ತು ಸ್ನಾತಕೋತ್ತರ ಕೇಂದ್ರದ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಗವಿಮಠ ದಂಪತಿ 27 ನೇ ಮದುವೆ ವಾರ್ಷಿಕೊತ್ಸವದ ಅಂಗವಾಗಿ ಸತ್ಕರಿಸಿ ಗೌರವಿಸಲಾಯಿತು.ಆರ್.ಬಿ.ಹುಣಿಶ್ಯಾಳ ಸ್ವಾಗತಿಸಿದರು.ಬೆಂಗಳೂರಿನ ರಾಮಚಂದ್ರರಾವ್ ನಿರೂಪಿಸಿದರು.

                                        ಗವಿಮಠ ದಂಪತಿ 27 ನೇ ಮದುವೆ ವಾರ್ಷಿಕೊತ್ಸವ

*****

ಡಾ.ಪ್ರಕಾಶ ಖಾಡೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯ ಅಧ್ಯಕ್ಷ ಪುಂಡಲೀಕ ಹಾಲಂಬಿ

ಸಂಗಮ ಸಮಾಗಮ'

ಡಾ.ಪ್ರಕಾಶ ಖಾಡೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯ ಅಧ್ಯಕ್ಷ ಪುಂಡಲೀಕ ಹಾಲಂಬಿ


 

ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಶ್ರೀ ಪುಂಡಲೀಕ ಹಾಲಂಬಿ ಅವರು ಬಾಗಲಕೋಟ ಜಿಲ್ಲೆ ಕೂಡಲ ಸಂಗಮಕ್ಕೆ ಆಗಮಿಸಿದಾಗ ಕೂಡಲ ಸಂಗಮದ ಪ್ರವಾಸಿ ಮಂದಿರದಲ್ಲಿ ಡಾ.ಪ್ರಕಾಶ ಖಾಡೆ ಅವರು ಶ್ರೀ ಎಸ್.ಜಿ.ಕೋಟಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಸಂಪಾದಿಸಿದ 'ಸಂಶೋಧನಾ ಸೋಪಾನಗಳು' ಕೃತಿ ಬಿಡುಗಡೆ ಮಾಡಿದರು.ಅವರೊಂದಿಗಿನ ಸ್ಮರಣೀಯ ಸಂದರ್ಭಗಳು :


ಬಾಗಲಕೋಟ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಳೆದ ಸಾಲಿನ ಕಾರ್ಯಕಾರಿ ಸಮಿತಿಯು ಹಮ್ಮಿಕೊಂಡಿದ್ದ ‘ಸಂಶೋಧನಾ ಕಮ್ಮಟ’ದಲ್ಲಿ ಮಂಡಿಸಲಾದ ಉಪನ್ಯಾಸಗಳನ್ನು ಒಳಗೊಂಡ ‘ಸಂಶೋಧನಾ ಸೋಪಾನ’ ಕೃತಿಯ ಬಿಡುಗಡೆ ಸಮಾರಂಭವು ಕೂಡಲ ಸಂಗಮದ ಅತಿಥಿ ಗೃಹದಲ್ಲಿ ರವಿವಾರ 29 ರಂದು ಜರುಗಿತು.. ನಿಕಟ ಪೂರ್ವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಜಿ.ಕೋಟಿ,ಗೌರವ ಕಾರ್ಯದರ್ಶಿಗಳಾಗಿರುವ ಡಾ.ಪ್ರಕಾಶ ಖಾಡೆ,ಡಾ.ಅಶೋಕ ನರೋಡೆ ಸಂಪಾದಕತ್ವದಲ್ಲಿ ಪ್ರಕಟವಾಗಿರುವ ಕೃತಿಯನ್ನು ಕಸಬಾ ಜಂಬಗಿಯ ನಿರ್ಮಲ ಪ್ರಕಾಶನ ಪ್ರಕಟಿಸಿದ್ದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುಂಡಲೀಕ ಹಾಲಂಬಿ ಬಿಡುಗಡೆ ಮಾಡಿದರು.
ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಕಾರ್ಯಕ್ರದಲ್ಲಿ ಮಂಡ್ಯ ಜಿಲ್ಲಾ ಕಸಾಪ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ,ಶ್ರೀಮತಿ ಹಾಲಂಬಿ,ಬಾಗಲಕೋಟ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಕಟಗಿಹಳ್ಳಿಮಠ ,ಸಹಕಾರಿ ಧುರೀಣ ಎಲ್.ಎಂ.ಪಾಟೀಲ,ನ್ಯಾಯವಾದಿ ತಾತಾಸಾಹೇಬ ಬಾಂಗಿ ,ಬಿ.ಪಿ.ಹಿರೇಸೋಮಣ್ಣವರ ,ಕೃಷ್ಣಗೌಡರ,ಶರಣು ಪಾಟೀಲ ಮೊದಲಾದವರು ಪಾಲ್ಗೊಂಡಿದ್ದರು.
ಜಮಖಂಡಿಯ ಚಿಂತನ ವೇದಿಕೆ ಮತ್ತು ನಿರ್ಮಲ ಪ್ರಕಾಶನ ಸಹಯೋಗದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅರ್ಜುನ ಕೋರಟಕರ ಮತ್ತು ಪ್ರಕಾಶಕ ಸದಾಶಿವ ಮಾಳಿ ಸ್ವಾಗತ ಕೋರಿ ವಂದಿಸಿದರು.

ಶುಕ್ರವಾರ, ಮೇ 23, 2014

ಸುಮಧುರ ಕ್ಷಣಗಳು -ಸುರೇಶ ರಾಜಮಾನೆ.

ಮಧುರಖಂಡಿಯ ಸುಮಧುರ ಕ್ಷಣಗಳು

 
 
ಆಕಾಶವೇ ಚಪ್ಪರ ಭೂಮಿಯೇ ಮಂಟಪ
ಗಿಡಮರಗಳೇ ತಳಿರು ತೋರಣ
ಸಮಾನ ಮನಸ್ಸುಳ್ಳ
ಸಾತ್ವಿಕ ಹೃದಯಗಳೇ
ಸಮಾರಂಭದ ಜೀವಾಳ
...
ಪುಸ್ತಕದ ಸುಂದರ ಮುಖಬಾವ
ಸುಮಧುರ ಬರಹ
ಮಧುರಖಂಡಿಯ 

ಸಮಾರಂಬಕ್ಕೆ ಹೋದ
ನನಗೆ
ಖುಷಿಯೋ ಖುಷಿ.

ಹತ್ತಿರದಿಂದ ನೋಡಿದ ನನಗೆ
ಅವರ
 ಅಂತರಾಳವನ್ನು ಅರಿಯುವ
ಅವಕಾಶ ನೀಡಿತು
ಈ ಪುಸ್ತಕದೊಳಗಿನ ಚಿತ್ರಣ
ತಿಳಿಸಿತು ಖಾಡೆ ಸರ್ ಜೀವನ

ಸಾಧಕರ ಸಾಲಿನಲಿ ನಮ್ಮವರು
ಸಂತೋಷವಾಯ್ತು
ಇವರೇ ಮೊದಲಿಗರು.

ಅದ್ಭುತವಾಗಿತ್ತು ಸಮಾರಂಭ
ಭಾಗವಹಿಸಿದ್ದಕ್ಕೆ
ನನಗಂತು ಆನಂದ

ಗವಿಮಠರ ಗರಡಿಯಲಿ
ಕವಿಗಳ ಮೇಳ
ಸ್ಮರಿಸಿದ ಜೀವಗಳೊಂದಿಗೆ
ಸ್ಮರಣೀಯ ಕ್ಷಣಗಳ
ಸಮ್ಮೇಳನ

ಡಾ. ಖಾಡೆ ಸರ್ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ
ಹಾಗೂ ಅವರ ಬಗ್ಗೆ ಸಮಗ್ರ ಚಿತ್ರಣ ನೀಡಿದ ಶ್ರೀ ಗುರುರಾಜ ಲೂತಿ ಸರ್ ಅವರ ಈ ಮಾಲಿಕೆಯ ಪ್ರಥಮ ಕೃತಿ
ಕೈಸೇರಿದಾಗ ನಾ ಕಣ್ಣಾಡಿಸಿದಾಗ ಕಂಡ ಡಾ. ಪ್ರಕಾಶ ಗ.ಖಾಡೆ ಸರ್ ನಿಜವಾಗ್ಲೂ ಸಾಧಕರಲ್ಲಿ ಮೊದಲಿಗರಾದದ್ದಕ್ಕೆ ನನಗಂತೂ ಹೆಮ್ಮೆಯನಿಸುತ್ತದೆ ಇದು ನಾವೆಲ್ಲ ಹೆಮ್ಮೆ ಪಡಲೇಬೇಕಾದ ವಿಷಯ..
 
ವಯಕ್ತಿಕವಾಗಿ ಡಾ.ಖಾಡೆ ಸರ್ ನನಗೆ ಪರಿಚಯವಾಗಿದ್ದು ನನ್ನ ಅದೃಷ್ಟ ಸಾಹಿತಿಗಳ ನಿಜವಾದ ಬಗೆ ಹೇಗಿರತ್ತೆ ಅನ್ನೋದನ್ನ ಅವರಲ್ಲಿ ಕಂಡಿದ್ದೆನೆ. ನನ್ನ ಜೀವನದಲ್ಲಿ ಮೊದಲನೆಯದಾಗಿ ಪರಿಚಯರಾದವರು ಸಾಧಕ ಸಾಹಿತಿಗಳಾದ ಡಾ.ಖಾಡೆ ಸರ್

ಎನ್ನುವದಕ್ಕೆ ಹೆಮ್ಮೆ ಪಡುತ್ತೆನೆ.
 
ಧನ್ಯವಾದಗಳೊಂದಿಗೆ
 
 =ಸೂರ್ಯ*
ಸುರೇಶ.ಎಲ್.ರಾಜಮಾನೆ, ರನ್ನಬೆಳಗಲಿ.