ಶುಕ್ರವಾರ, ಮೇ 23, 2014

ಸುಮಧುರ ಕ್ಷಣಗಳು -ಸುರೇಶ ರಾಜಮಾನೆ.

ಮಧುರಖಂಡಿಯ ಸುಮಧುರ ಕ್ಷಣಗಳು

 
 
ಆಕಾಶವೇ ಚಪ್ಪರ ಭೂಮಿಯೇ ಮಂಟಪ
ಗಿಡಮರಗಳೇ ತಳಿರು ತೋರಣ
ಸಮಾನ ಮನಸ್ಸುಳ್ಳ
ಸಾತ್ವಿಕ ಹೃದಯಗಳೇ
ಸಮಾರಂಭದ ಜೀವಾಳ
...
ಪುಸ್ತಕದ ಸುಂದರ ಮುಖಬಾವ
ಸುಮಧುರ ಬರಹ
ಮಧುರಖಂಡಿಯ 

ಸಮಾರಂಬಕ್ಕೆ ಹೋದ
ನನಗೆ
ಖುಷಿಯೋ ಖುಷಿ.

ಹತ್ತಿರದಿಂದ ನೋಡಿದ ನನಗೆ
ಅವರ
 ಅಂತರಾಳವನ್ನು ಅರಿಯುವ
ಅವಕಾಶ ನೀಡಿತು
ಈ ಪುಸ್ತಕದೊಳಗಿನ ಚಿತ್ರಣ
ತಿಳಿಸಿತು ಖಾಡೆ ಸರ್ ಜೀವನ

ಸಾಧಕರ ಸಾಲಿನಲಿ ನಮ್ಮವರು
ಸಂತೋಷವಾಯ್ತು
ಇವರೇ ಮೊದಲಿಗರು.

ಅದ್ಭುತವಾಗಿತ್ತು ಸಮಾರಂಭ
ಭಾಗವಹಿಸಿದ್ದಕ್ಕೆ
ನನಗಂತು ಆನಂದ

ಗವಿಮಠರ ಗರಡಿಯಲಿ
ಕವಿಗಳ ಮೇಳ
ಸ್ಮರಿಸಿದ ಜೀವಗಳೊಂದಿಗೆ
ಸ್ಮರಣೀಯ ಕ್ಷಣಗಳ
ಸಮ್ಮೇಳನ

ಡಾ. ಖಾಡೆ ಸರ್ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ
ಹಾಗೂ ಅವರ ಬಗ್ಗೆ ಸಮಗ್ರ ಚಿತ್ರಣ ನೀಡಿದ ಶ್ರೀ ಗುರುರಾಜ ಲೂತಿ ಸರ್ ಅವರ ಈ ಮಾಲಿಕೆಯ ಪ್ರಥಮ ಕೃತಿ
ಕೈಸೇರಿದಾಗ ನಾ ಕಣ್ಣಾಡಿಸಿದಾಗ ಕಂಡ ಡಾ. ಪ್ರಕಾಶ ಗ.ಖಾಡೆ ಸರ್ ನಿಜವಾಗ್ಲೂ ಸಾಧಕರಲ್ಲಿ ಮೊದಲಿಗರಾದದ್ದಕ್ಕೆ ನನಗಂತೂ ಹೆಮ್ಮೆಯನಿಸುತ್ತದೆ ಇದು ನಾವೆಲ್ಲ ಹೆಮ್ಮೆ ಪಡಲೇಬೇಕಾದ ವಿಷಯ..
 
ವಯಕ್ತಿಕವಾಗಿ ಡಾ.ಖಾಡೆ ಸರ್ ನನಗೆ ಪರಿಚಯವಾಗಿದ್ದು ನನ್ನ ಅದೃಷ್ಟ ಸಾಹಿತಿಗಳ ನಿಜವಾದ ಬಗೆ ಹೇಗಿರತ್ತೆ ಅನ್ನೋದನ್ನ ಅವರಲ್ಲಿ ಕಂಡಿದ್ದೆನೆ. ನನ್ನ ಜೀವನದಲ್ಲಿ ಮೊದಲನೆಯದಾಗಿ ಪರಿಚಯರಾದವರು ಸಾಧಕ ಸಾಹಿತಿಗಳಾದ ಡಾ.ಖಾಡೆ ಸರ್

ಎನ್ನುವದಕ್ಕೆ ಹೆಮ್ಮೆ ಪಡುತ್ತೆನೆ.
 
ಧನ್ಯವಾದಗಳೊಂದಿಗೆ
 
 =ಸೂರ್ಯ*
ಸುರೇಶ.ಎಲ್.ರಾಜಮಾನೆ, ರನ್ನಬೆಳಗಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ