ಗುರುವಾರ, ಮೇ 29, 2014

ಬದುಕಿನ ಅರ್ಥವಂತಿಕೆಗೆ ಕಲಾಕೃತಿಗಳೆ ಸಾಕ್ಷಿ.-ಡಾ.ಖಾಡೆ


        ಬದುಕಿನ ಅರ್ಥವಂತಿಕೆಗೆ ಕಲಾಕೃತಿಗಳೆ ಸಾಕ್ಷಿ.-ಡಾ.ಖಾಡೆ


ಇಳಕಲ್ಲ. 22.05.2014-
ಬದುಕು ಸುಂದರ ಮತ್ತು ಅರ್ಥಪೂರ್ಣವಾಗಿ ರೂಪುಗೊಳ್ಳಲು ಕಲಾಕೃತಿಗಳು ನಮ್ಮ ನಡುವೆ ಮಾಧ್ಯಮವಾಗಿ ನಿಲ್ಲುತ್ತವೆ ಎಂದು  ಸಾಹಿತಿ ಡಾ.ಪ್ರಕಾಶ ಖಾಡೆ  ಹೇಳಿದರು.ನಗರದ ಗವಿಮಠ ಲಲಿತಕಲಾ ಮಹಾಸಂಸ್ಥಾನದ ಚಿತ್ರಕಲಾ ಸ್ನಾತಕೋತ್ತರ ಕೇಂದ್ರ ಹಮ್ಮಿಕೊಂಡಿದ್ದ ಲಕ್ಷ್ಮಣ ಬದಾಮಿ ಅವರ ‘ರೂಪ ನಿರೂಪ’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯದಲ್ಲಿ ಕಲಾವಿಮರ್ಶಕರ ಕೊರತೆಯನ್ನು ಲಕ್ಷ್ಮಣ ಬದಾಮಿ ಅವರು ತುಂಬುವ ಮೂಲಕ ‘ರೂಪ ನಿರೂಪ’ ಕೃತಿಯ ಮೌಲ್ಯ ಹೆಚ್ಚಿಸಿದ್ದಾರೆ ಎಂದೂ ಅವರು ಹೇಳಿದರು. ಜಿಲ್ಲೆಯಲ್ಲಿ ಅರಂಭಿಸಲು ಉದ್ದೇಶಿಸಿರುವ ಲಲಿತಕಲಾ ವಿಶ್ವವಿದ್ಯಾಲಯವನ್ನು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿಯೇ ಆರಂಭಿಸುವ ಮೂಲಕ ಬಾದಾಮಿ ಪರಿಸರದ ಮೂಲಕ ನಮ್ಮ ಭಾಗದ ಕಲೆ,ಸಂಸ್ಕøತಿಯನ್ನು ವಿಶ್ವಮಾನ್ಯಗೋಳಿಸಬೇಕಾಗಿದೆ ಎಂದೂ ಡಾ.ಖಾಡೆ ಹೇಳಿದರು

.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಶಿಕ್ಷಣ ಇಲಾಖೆ ಆಯುಕ್ತರ ಕಛೇರಿಯ ಚಿತ್ರಕಲಾ ಅಧಿಕಾರಿ ಮಹಾಂತೇಶ ಕಂಠಿ ಚಿತ್ರಕಲೆಯೂ ಸೇರಿದಂತೆ ಲಲಿತಕಲೆಯ ಎಲ್ಲ ಅಧ್ಯಯನಕ್ಕೆ ಈಗ ತುಂಬಾ ಅವಕಾಶಗಳಿದ್ದು ಹೊಸಬರು ಈ ಕಡೆಗೆ ಆಕರ್ಷಿತರಾಬೇಕೆಂದರು.ವಕೀಲರ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಲ್ಲಿಕಾರ್ಜುನ ಬೃಂಗಿಮಠ ಮಾತನಾಡಿ ಕಲಾತ್ಮಕ ಚಿತ್ರಬರಹಗಳು ಮಾಧ್ಯಮದ ಮೂಲಕ ಜನರ ಅಭಿಪ್ರಾಯಗಳನ್ನು ತುಂಬಾ ಸಮರ್ಥವಾಗಿ ರೂಪಿಸುತ್ತಿವೆ ಎಂದರು.ಬೆಳಗಾವಿ ವಿಭಾಗದ ಚಿತ್ರಕಲಾ ಅಧಿಕಾರಿ ಹೇಮಂತ ದೇಶಪಾಂಡೆ,ಬೆಂಗಳೂರು ಆಯುಕ್ತರ ಕಛೇರಿಯ ಜೆ.ಎಂ.ಜಂಗೀ.ಗುಲ್ಬರ್ಗಾ ವಿಭಾಗದ ಟಿ.ದೇವೇಂದ್ರಪ್ಪ ಕೃತಿಕಾರ ಲಕ್ಷ್ಮಣ ಬದಾಮಿ ಮೊದಲಾದವರು ವೇದಿಕೆ ಮೇಲಿದ್ದರು.ಪ್ರಾಚಾರ್ಯ ಡಾ.ಬಸವರಾಜ ಗವಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿ ಬರುವ ಅಕ್ಟೋಬರದಲ್ಲಿ ಇಲಕಲ್ಲದಲ್ಲಿ ಕಲಾ ಸಮಾವೇಶ ಮತ್ತು ಸ್ನಾತಕೋತ್ತರ ಕೇಂದ್ರದ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಗವಿಮಠ ದಂಪತಿ 27 ನೇ ಮದುವೆ ವಾರ್ಷಿಕೊತ್ಸವದ ಅಂಗವಾಗಿ ಸತ್ಕರಿಸಿ ಗೌರವಿಸಲಾಯಿತು.ಆರ್.ಬಿ.ಹುಣಿಶ್ಯಾಳ ಸ್ವಾಗತಿಸಿದರು.ಬೆಂಗಳೂರಿನ ರಾಮಚಂದ್ರರಾವ್ ನಿರೂಪಿಸಿದರು.

                                        ಗವಿಮಠ ದಂಪತಿ 27 ನೇ ಮದುವೆ ವಾರ್ಷಿಕೊತ್ಸವ

*****

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ